Home »  Blog » Parents »  ಲಾಕ್ ಡೌನ್ ಅವಧಿಯಲ್ಲಿ ಮಗುವನ್ನು ಹೇಗೆ ಕ್ರಿಯಾಶೀಲಗೊಳಿಸುವುದು

ಲಾಕ್ ಡೌನ್ ಅವಧಿಯಲ್ಲಿ ಮಗುವನ್ನು ಹೇಗೆ ಕ್ರಿಯಾಶೀಲಗೊಳಿಸುವುದು

ಈ ಸಲದ ಲಾಕ್ ಡೌನ್ ದಲ್ಲಿ ಏಕತಾನತೆ, ಒಂದೇ ಕಡೆಗೆ ದೀರ್ಘಾವದಿಯ ವಾಸ್ತವ್ಯ ನಮ್ಮನಿತ್ಯದ ಬದುಕಾಗಿತ್ತು. ಇದರಿಂದ ಮುಕ್ತಿಹೊಂದಲು ಕೆಲವರು ವಿಡಿಯೊ ವೈರಲ್ ದಲ್ಲಿ ನಿರತರಾಗಿದ್ದರೆ, ಇನ್ನು ಕೆಲವರು ಇದರಿಂದಲೂ ವಂಚಿತರಾದರು.ನಾವು ವೈರಲ್ ಕ್ಲಿಪ್ಸ್ ಗಳನ್ನು ಮೆಲುಕು ಹಾಕುತ್ತಾ ನಮ್ಮ ಸಮಯ ಕಳೆದರೂ ಸಹ ನಮ್ಮ ಹಳೆಯ ದಿನಗಳ ಸೊಗಸು ಮತ್ತೆ ಮರುಕಳಿಸಲಿಲ್ಲ.

ವಯಸ್ಕರಂತೆ ಮಕ್ಕಳೂ ಬೇಸರ ಮತ್ತು ಏಕತಾನತೆ ಅನುಭವಿಸಬೇಕಾಯಿತು.ಕೆಲವು ಗಂಟೆಗಳ ಆನ್ ಲೈನ್ ಕ್ಲಾಸ್ ಗಳನ್ನು ಹೊರತುಪಡಿಸಿದರೆ ಅವರಿಗೆ ಬೇರೇನೂ ಕೆಲಸವಿರಲಿಲ್ಲ. ಇಂತಹ ಸಂದಿಘ್ಧಪರೀಸ್ಥಿತಿಯನ್ನು ಪಾಲಕರು ಹಿಂದೆಂದೂ ಅನುಭಿವಿಸಿರಲಿಲ್

ಮಕ್ಕಳ ಮನಸ್ಸು ಯಾವಾಗಲೂ ಓಡಾಟ-ಕುಣಿದಾಟದೊಂದಿಗೆ ಅತ್ಯಂತ ಪ್ರಫುಲ್ಲವಾಗಿರುವ ಸರ್ವೇಸಾಮಾನ್ಯವಾಗಿದ್ದು, ನಿರಂತರ ಚಟುವಟಿಕಿಯಿಂದಿರುತ್ತಾರೆ. ತ್ವರಿತಗತಿಯಲ್ಲಿ ಪ್ರಗತಿಕಾಣುತ್ತಿರುವ ಇಂದಿನ ಪ್ರಂಚದಲ್ಲಿ ಚಿಗುರೊಡೆಯುತ್ತಿರು ಮಕ್ಕಳನ್ನು ಕ್ರಿಯಾಶೀಲತೆ ಹಾಗೂ ಏಕಾಗೃತೆ ಮೂಡಿಸಲು ನಾವು ಪ್ರಯತ್ನಿಸಬೇಕು. ಆದರೂ ಸಹ ಕ್ರಿಯಾಶೀಲತೆ ಎಂಬ ಪದ ಬಾಯಿಮಾತಿನಲ್ಲಿ ಹೇಳುವುದು ಸುಲಭ ಸಾಧ್ಯವಾದರೂ ಆಚರಣೆಲ್ಲಿ ತರುವುದು ಕಷ್ಟದ ಕೆಲಸ. ಮಹಾನ್ ಕಲಾವಿದರು ತಮ್ಮ ಸಾಧನೆಯ ಮೂಲಕ ಹೇಗೆ ಸದ್ವಿನಿಯೋಗ ಮಾಡಿಕೊಂಡರು ಎಂಬ ಅಂಶಗಳು ಎಲ್ಲರ ಬಾಳಿನಲ್ಲಿ ಸ್ಪೂರ್ತಿನ್ನು ತಂದುಕೊಡುತ್ತವೆ. ನಮ್ಮ ಮಕ್ಕಳು ಮುಂದಿನ ಲಿಯೋನಾರ್ಡೊ ವಿಂಚಿ ಅಥವಾ ಬೀಟೊವಿನ್ ಆಗಬೇಕೆಂದು ಮಾತ್ರ ನಾವು ಬಯಸಿದರೆ ಸಾಲದು, ಅಸಾಮಾನ್ಯ ವ್ಯಕ್ತಿಗಳು ಮಹತ್ತ ಸಾಧನೆಗಾಗಿ ಹೇಗೆ ತಮ್ಮ ಜೀವವನ್ನೇ ತೇದರು ಎಂಬುದೇ ನಮ್ಮ ಮಕ್ಕಳಿಗೆ ದಾರಿದೀಪ.

ಬಾಲ್ಯದ ದಿನಗಳಲ್ಲೇ ಕ್ರಿಯಾಶೀಲತೆ ಕುರಿತು ನಮ್ಮ ಪಾಲಕರಲ್ಲಿ ನಾವು ಅರಿವು ಮೂಡಿಸಬೇಕಾಗಿದೆ. ಮಕ್ಕಳ ಕಲ್ಪನಾಶಕ್ತಿ ಗರಿಗೆದರುವುದಕ್ಕಾಗಿ , ಅವರನ್ನು ಹೇಗೆ ಕ್ರಿಯಾಶೀಲರಾಗುವಂತೆ ಪ್ರೋತ್ಸಾಹಿಸಲು ಪಾಲಕರಿಗೆ ಮಾರ್ಗದರ್ಶನ ನೀಡಲು ನಾವಿದ್ದೇವೆ. ಯಾಕೆಂದರೆ ಅತ್ಯುತ್ತಮ ಅಂಶಗಳು ಸರಳ ಹಾಗೂ ಸದೃಢವಾಗಿರುತ್ತವೆ. ಈ ಟಿಪ್ಪಣಿಯಲ್ಲಿ, ನಮ್ಮ ಪುಟ್ಟ ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡುವ ಬಗ್ಗೆ ಹೆಚ್ಚು ಮಾತನಾಡೋಣ
ನಾಳಿನ ಪ್ರತಿಭೆಗಳು.

child learning on laptopಪ್ರಶ್ನೆ ಕೇಳಲು ಬಿಡಿರಿ
ಮಕ್ಕಳ ಮನಸ್ಸು ಅತ್ಯಂತ ಕುತೂಹಲಕಾರಿಯಾಗಿರುತ್ತದೆ. ನಿಮ್ಮ ಮಗು ಹಲವುಹತ್ತು ಪ್ರಶ್ನೆಗಳನ್ನು ಕೇಳಿದರೆ ನೀವು ಉದಾಸೀನತೆಯಿಂದ ವರ್ತಿಸಬೇಡಿ. ಅವರ ಪ್ರಶ್ನೆಗಳನ್ನು ತಾತ್ವಿಕವಾಗಿ ಉದಾರ ಮನಸ್ಸಿನಿಂದ ಪರಾಮರ್ಶಿಸಿರಿ. ಇದಲ್ಲದೇ ಕಲೆ ಮತ್ತು ಕರಕುಶಲತೆ ಬೆಳೆಸಲು ಅವರನ್ನು ಪ್ರೋತ್ಸಾಹಿಸಿರಿ,ಕ್ರಿಯಾಶೀಲತೆ ಹಿಂದಿನ ಮಹತ್ವ ಕುರಿತು ಚರ್ಚಿಸಿರಿ. ವಿವೇಚನಾ ಶಕ್ತಿ ಪ್ರಬಲಗೊಳಿಸಿರಿ.

ಅಸಭ್ಯ ರೀತಿಯ ಪ್ರಶ್ನೆಗಳೆಂದು ತಾತ್ಸಾರ ಮಾಡದಿರಿ.ಉದಾಹರಣೆಗೆ ಅವರಲ್ಲಿ ಸುಪ್ತವಾಗಿರುವ ಪ್ರತಭೆಯನ್ನು. ಗುರುತಿಸಿರಿ, ಪ್ರಮುಖ 3 ಬಯಕೆಗಳನ್ನು ಅರಿಯಿರಿ . ಅವರನ್ನು ಮಹಾನ್ನ ನಾಯಕನನ್ನಾಗಿ ಬೆಳೆಸಿರಿ.

ಮನೆ ವಸ್ತುಗಳ ಪುನರ್ಬಳಕೆ
ಪ್ರದರ್ಶನ ಗೊಂಬೆಗಳಿಗೆ ಮಾರು ಹೋಗುವ ಬದಲು ಈಗಾಗಲೆ ಮನೆಯಲ್ಲಿ ಬಳಸಿದ ವಸ್ತುಗಳ ಪುನರ್ ಬಳಕೆ ಮಾಡುವುದು ಅತ್ಯುತ್ತಮ. ಸಿಡಿಗಳು, ರಟ್ಟಿ ಡಬ್ಬಿಗಳು, ಗಿಪ್ಟಗಳಿಗೆ ಬಳಸಿದ ಪೇಪರಗಳು , ಪ್ಲಾಸ್ಟಿಕ್ ಬಾಟಲ್ ಗಳನ್ನು ನೀವು ಉಪಯೋಗಿಸಬಹುದು. ಈ ವಸ್ತುಗಳನ್ನುಬಳಸಿಕೊಂಡು ಗೋಡೆ ಅಲಂಕಾರಿಕ ವಸ್ತುಗಳು, ಸಸಿಗಳಿಗಾಗಿ ಮಡಕೆಗಳು ಮತ್ತು ಇನ್ನೂ ಹಲವನ್ನು ತಯಾರಿಸಬಹುದು. ಹಳೇ ಶೂ ಬಾಕ್ಸ್ ಅಥವಾ ಪ್ಯಾಕಿಂಗ್ ಡಬ್ಬಿಗಳಿಗೆ ಮರು ಜಿವನೀಡಿ ಪೆನ್ ಹೋಲ್ಡರ್, ಆಭರಣಗಳ ಸ್ಟ್ಯಾಂಡ್, ಆಟದ ಕಾರು ಮತ್ತು ಇನ್ನುಳಿದ ಆಕರ್ಷಕ ವಸ್ತುಗಳನ್ನು ತಯಾರಿಸಬಹುದು.

ವ್ಯರ್ಥವಾಗಿ ಎಸೆದಿರುವ ವಸ್ತುಳ ಪುನರ್ ಬಳಕೆಯಿಂದ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ. ಇದರಿಂದ ವಸ್ತುಗಳ ಮಹತ್ವ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣದ ಮಹತ್ವವನ್ನು ನಿಮ್ಮ ಮಗು ಅರಿಯಬಹುದಾಗಿದೆ.

ಶಾಲೆಯ ಆಚೆಗೆ ಬೋಧನಾ ಕೌಶಲ್ಯಗಳು
ನಿಮ್ಮ ಮಕ್ಕಳು ಮನೆಯಲ್ಲಿರುವಾಗ ಶಾಲೆಯ ಒತ್ತಡವನ್ನು ಬದಿಗಿಟ್ಟು ತಮ್ಮ ವರ್ಗಕೋಣೆಯ ಜ್ಞಾನವನ್ನು ಪಡೆಯಲು ಸಾಧ್ಯ. ಈ ‘ಮಾಡಿಕಲಿ’ ಪದ್ಧತಿಯ ಶಿಕ್ಷಣವನ್ನು LEAD ಪ್ರಭಾವಿತ ಎಲ್ಲ ಶಾಲೆಗಳಲ್ಲಿ ಮಕ್ಕಳು ಸುಲಭವಾಗಿ ಪಡೆಯಬಹುದು.

ತರಗತಿಯಲ್ಲಿ ನಿಮ್ಮ ಮಗುವಿನ ಕಲಿಕೆಯ ಡೌನ್‌ಲೋಡ್ ಅನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಾರಂಭಿಸಬಹುದು. ಈ ಅಂಶಗಳನ್ನು ನಿಜಜೀವನದ ಸನ್ನಿವೇಶಗಳಲ್ಲಿ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಆಮ್ಲ ಮತ್ತು ಪ್ರತ್ಯಾಮ್ಲ ಕುರಿತು ಮನೆಯಲ್ಲೇ ಹೇಳ ಬಹುದು, ಪ್ರಯೋಗದೊಂದಿಗೆ ಮಂಜು ಗಡ್ಡೆ ಕರಗುವಾಗ ನೀರಿನ ಅಣುಗಳು ಹೇಗೆ ದೂರ ಸರಿಯುತ್ತವೆ ಎಂಬುದನ್ನು ಪ್ರಯೊಗದ ಮೂಲಕ ತೋರಿಸಬಹುದು, ಆಟದ ತಂಡಗಲನ್ನು ರಚಿಸುವ ಮೂಲಕ ಸಾಮೂಹಿಕ ಕೆಲಸದ ಮಹತ್ವವನ್ನು ಮನವರಿಕೆ ಮಾಡಿಕೊಡುವುದು. ಮಕ್ಕಳ ಅದ್ಭುತ ಭವಿಷ್ಯ ನಿರ್ಮಾಣಕ್ಕೆ ಇದು ಬುದ್ಧಿವಂತಿಕೆಯ ಪದ್ಧತಿಯಾಗಿದೆ.

child studyingಕಥಾನಕ ಶಕ್ತಿಯ ಬಳಕೆ
ಮನೆಯಲ್ಲಿ ಸಹಕರಿಸುವದರಿಂದ ಮಕ್ಕಳು ಅತ್ಯಂತ ಆಕರ್ಷಕ ಪ್ರಪಂಚವನ್ನು ನಿರ್ಮಿಸುವುದನ್ನು ತಡೆಯಬೇಕಾಗಿಲ್ಲ. ಅಚ್ಚುಕಟ್ಟಾದ ಸೃಜನಶೀಲತೆಗೆ ಅವಕಾಶಕೊಡಿ ಹಾಗೂ ಬಿಳಿಹಾಳೆ ಪೆನ್ನಿನ ಮೂಲಕ ಪ್ರಪಂಚದ ಸೌಂರ್ಯವನ್ನು ವರ್ಣಿಸಲು ಬಿಡಿ. ಕಥೆ ಓದುವುದು ಅವರಿಗೆ ಆರಂಭವನ್ನು ಒದಗಿಸುತ್ತದೆ. ಕಥಾ ವಿವರಣೆಯು ಮಕ್ಕಳಲ್ಲಿ ಎಂತಹ ಪರೀಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಯೋಗ್ಯ ತೀರ್ಮಾನ ಕೈಗಳ್ಳಲು ಸಹಾಯಕವಾಗುವುದು. ಭಾರತದ ಅಗ್ರಗಣ್ಯ ಲೇಖಕ ಚೇತನ್ ಭಗತ್ ಸಹ ಕಥೆ ಹೇಳುವದರ ಪ್ರಭಾವ ಕುರಿತು ವ್ಯಾಪಕವಾಗಿ ಮಾತನಾಡಿದ್ದಾರೆ. ಅವರ ಪುಸ್ತಕಗಳು ಬ್ಲಾಕ್ ಬಸ್ಟ್ ಪೀಚರ್ ಫಿಲ್ಮ್ ಗಳಾಗಿ ಬದಲಾಗುವದಕ್ಕೆ ಮುಂಚೆಯೇ ,ಅವರು ಉತ್ಕಟ ಕಥೆ ಹೇಳುವವರಾಗಿದ್ದರು. ಭಗತ್ ಅವರೊಂದಿಗಿನ LEAD MasterClasses ಗಳು ತಮ್ಮ ನವೀನ ವಯಸ್ಸಿನಿಂದಲೇ ಮಕ್ಕಳು ತಮ್ಮ ಬರವಣಿಗೆಯ ಕೌಶಲ್ಯವನ್ನು ಹೇಗೆ ವೃದ್ಧಿಸಬಹು ಎಂಬುದನ್ನು ವಿಶ್ಲೇಷಿಸುತ್ತಾರೆ.ಈ ವಿಶ್ಲೇಷಣೆಯು ನಿಮ್ಮ ಮಗುವಿನ ಚಿಂತನಾ ಕೌಶಲ್ಯಗಳನ್ನು ಹೆಚ್ಚಿಸುತ್ತದೆ

ನಿಮ್ಮ ಮಗುವನ್ನು ನಮ್ಮ ಪಾಲುದಾರ ಶಾಲೆಗೆ ಸೇರಿಸಿ
ಮೇಲಿನ ಎಲ್ಲ ಅಂಶಗಳು ಮಕ್ಕಳನ್ನು ತಮ್ಮ ಆಲೋಚನೆಯೊಂದಿಗೆ ಸೃಜನಶೀಲರನ್ನಾಗಿಸಲು ಮತ್ತು ಅವರ ಆಲೋಚನೆಗಲನ್ನು ಉತ್ತಮ ತಾರ್ಕಿಕತೆಯೊಂದಿಗೆ ಏಕಕಾಲದಲ್ಲಿ ಅಡಿಪಾಯ ಹಾಕಲು ಪ್ರೇರೇಪಿಸುತ್ತದೆ.ಅವರು ಹಾಗೆ ಮಾಡಿದಾಗ, ಅವರ ಅಭಿಪ್ರಾಯವನ್ನು ಗೌರವಿಸಿ , ಅವರು ಒಪ್ಪಿಕೊಳ್ಳುವಂತೆ ಮಾಡಿರಿ.

LEAD ಶಾಲೆಗಳನ್ನು ನಾವು ಅತ್ಯುತ್ತಮ ಕಲಿಕಾ ಕೇಂದ್ರಗಳಾಗಿ ಪರಿವರ್ತನೆ ಮಾಡುತ್ತಿದ್ದೇವೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯೊಂದಿಗೆ ಉಜ್ವಲ ಭವಿಷ್ಯ ನಿರ್ಮಾಣ ಖಚಿತ. ನೀವು ನಿಮ್ಮ ಮಕ್ಕಳನ್ನು LEAD ಪ್ರಭಾವಿತ ಶಾಲೆಗಳಿಗೆ ಸೇರಿಸಲು:ಈಗ ಪ್ರವೇಶ ಪತ್ರವನ್ನು ಭರ್ತಿ ಮಾಡಿ

About the author

Manjiri Shete

A journey towards making your school 100% complete

How the definition of a complete school changed post the lockdown?

Read More

17/06/2022 
Manjiri Shete  |  Parents

How online education boosts Parent-teacher relationship?

How parenting has evolved over the last couple of decades

Read More

09/07/2022 
Manjiri Shete  |  Parents

How to stay energised & connected during online teaching?

Teachers often catch their students staring into space in the middle of a class. Just when they think they have devised a well-structured lesson plan, they may find their students distracted and out t

Read More

29/08/2022 
Manjiri Shete  |  Teachers

Why do we need to look beyond a basic School ERP System?

Today, deploying an ERP solution across schools has become an inevitable part of the school functioning where a systemic framework handles all the aspects of its processes. It is built to meet the div

Read More

02/01/2023 
Manjiri Shete  |  School Owner

x

Give Your School The Lead Advantage

lead
x
Planning to reopen
your school?
Enquire Now
x

Give Your School The Lead Advantage

x

Download the EBook

x

Download the NEP
Ebook

x

Give Your School The Lead Advantage